ನಿಲ್ದಾಣ

ಹಳಿಗಳ ಮೇಲೆ ಅಲೆದು
ಅಲೆದು ತಿರುವಿನ ಪಯಣ
ನನ್ನೊಳಗಿನ ಮಿತಿ ಮೀರಿ
ಬೀಸುಗಾಳಿಗೆ ಉಸಿರಾಡಿದ ಕನಸುಗಳು
ನಾನಿಳಿದ ನಿಲ್ದಾಣದ ತುಂಬ ಬರೀ ಅಪರಿಚಿತರು.

ಯಾರೊಳಗೆ ಯಾರಿಲ್ಲ ಬರೀ
ಕಣ್ಣೋಟಗಳು ಹೆಜ್ಜೆ ಹೆಜ್ಜೆಗೂ
ತವಕಗಳು ಅರಳಿದ ಹೂವಿನಿಂದ
ಒಮ್ಮೆಲೇ ಘಮ್ಮೆಂದು ಜೀವಧಾತು
ಮಿತಿ ಮೀರಿದ ಆಶೆಗಳು ಕೇಳಿದವು ಕಾರಣವ.

ಅಂತಃಪುರದ ಹೊರಗೆ ಅಂತರಂಗದ
ಒಳಗೆ ಬಯಲು ತಪಿಸಿ ಕಣ್ಮುಚ್ಚಿ
ಧ್ಯಾನಿಸಿದವು ಮಳೆಯ ಮಂಜನ ಸ್ನಾನ
ನಡೆದ ಪಾದ ಶಿರ ಭುಜಗಳೆಲ್ಲಾ
ದಂಗಾಗಿ ನಿಂತವು ತಮ್ಮ ಬಿರು ಚಲನೆಗೆ ಬೆರಗಾಗಿ.

ದುಃಖದ ಬೇಸರದ ವಿಷಾದದ ಖುಷಿಯ
ನೆರಳು ಹಿಂಬಾಲಿಸಿ ಯಾರ ಸ್ಮರಣೆಯಲಿ
ಸಿಹಿ ನಿದೆಯ ಆಳಕೆ ಇಳಿದ ಮುಖಗಳು
ಯಾವುದೂ ಕಹಿಯಲ್ಲ ಈ ಪ್ರೀತಿಯ ಜಗದಲಿ
ಕಾರಣವಿಲ್ಲದೇ ಸುಮ್ಮನೆ ಪಯಣಿಸಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸೊಂದ ಕಂಡೆ
Next post ಸೂರ್ಯ ಕೈಂಕರ್ಯ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys